ಈ ಎರಡು ಘಟನೆಗಳು  ನನ್ನಲ್ಲಿ ಅವರ ಬಗ್ಗೆ   ಮತ್ತಷ್ಟು ವಿಶೇಷ  ಗೌರವದ  ಭಾವನೆಗಳನ್ನು ಹುಟ್ಟು ಹಾಕಿದ್ದಂತೂ  ನಿಜ .  ನಿಮ್ಮೊಡನೆ ಹಂಚಿ ಕೊಳ್ಳಲು ಈ ಸಮಯಕ್ಕಿಂತಲೂ  ಸೂಕ್ತ ಇನ್ನೆಲ್ಲಿ ?

 ಉಡುಪಿಯ ಮುದ್ದಣ ಮಂಟಪದಲ್ಲಿ  ತುಳುಕೂಟದ ನಾಟಕ  ಉತ್ಸವ  ನಡೆಯುತ್ತಿತ್ತು . ಆ ದಿನದ ನಾಟಕದಲ್ಲಿ   ಆ ಪಾತ್ರಧಾರಿ  ತನ್ನ ಸಾಮರ್ಥ್ಯದ ಮಟ್ಟಿನ ಅಭಿನಯ ನೀಡಿದ್ದ . ನಾಟಕ ಮುಗಿದಾಗ  ಸೀದಾ  ವೇಷ  ಕಳಚುವ ಕೋಣೆಯತ್ತ ನಡೆದ  ಇವರು ಆತನನ್ನು  ಅಭಿನಂದಿಸಲು  ಮುಂದಾದರು .  ವೇಷಧಾರಿ  ವೇಷ ಕಳಚುವುದರಲ್ಲಿ  ಮಗ್ನನಾಗಿದ್ದರಿಂದ  ಬಂದವರ ಕಡೆ ಅಷ್ಟಾಗಿ ಗಮನಿಸಲಿಲ್ಲ . ಇವರು ಕಾದರು , ಕಾದರು , ಸುಮಾರು ಹತ್ತಿಪ್ಪತ್ತು ನಿಮಿಷಗಳ ಕಾಲ ಆತ ವೇಷ ಕಳಚಿ ಬರುವವರೆಗೆ ಕಾದು  ಅವನ ಬೆನ್ನು ತಟ್ಟಿದರು, ಮೆಚ್ಚುಗೆಯ ನುಡಿಯಾಡಿದರು  .
ತನ್ನ ಬೆನ್ನು ತಟ್ಟಿದ ವ್ಯಕ್ತಿ  ಬಿರುದಾಂಕಿತ ಮಹಾನ್  ರಂಗ ಕಲಾವಿದ  ಎಂದು ಗೊತ್ತಾಗಿ ಆ ವ್ಯಕ್ತಿಯ ಬಾಯಿಂದ  ಕ್ಷಣ  ಮಾತೇ ಹೊರಡಲಿಲ್ಲ !

ಇನ್ನೊಮ್ಮೆ ಕಪ್ಪಣ್ಣ ಅಂಗಳಕ್ಕೆ ಹೋದ ದಿನ.   ಕಪ್ಪಣ್ಣನವರು  ರಂಗ ಮಂದಿರದೊಳಗೆಲ್ಲಾ  ಅಡ್ಡಾಡಿಸಿ  ಅಲ್ಲೇ ವೇದಿಕೆಯ ಮೇಲೆ ಕೂರಲು ಹೇಳಿದರು .
ಇವರು  ನಮ್ಮ ನಿಮ್ಮಂತೆ  ನೇರ ಕೂರಲಿಲ್ಲ! .
ಪ್ರಧಾನಿ  ಮೋದಿ   ಸಂಸತ್ತು ಪ್ರೇವೇಶಿಸುವ  ಮೊದಲು ಧೀರ್ಘ ನಮಸ್ಕರಿಸಿದಂತೆ   ಆ ವೇದಿಕೆಗೆ ಎರಡೂ ಕೈಗಳಿಂದ ನಮಸ್ಕರಿಸಿ  ನಂತರ ಪೀಠಾಧೀಶರಾದರು !

ಈ ಎರಡೂ ಘಟನೆಗಳನ್ನು ನೆನಪಿಸಲು ಕಾರಣವಾದ ವ್ಯಕ್ತಿ   ಮುಂಬೈಯ ಮೇರು ರಂಗ ನಟ  , ಮೋಹಕ  ವ್ಯಕ್ತಿತ್ವದ , ಮೋಹನಾಂಗ  ಮೋಹನ ಮಾರ್ನಾಡು !.
ಬಹುಶ: ಇಂತಹ ವೃತ್ತಿ ಅಭಿಮಾನವೇ ಅವರನ್ನು ಈ ಮಟ್ಟಕ್ಕೆ ಬೆಳೆಸಿರುವುದು !.

ಮಣ್ಣ ಬಾಜನದ  ಕವನವನ್ನು  ತಾನೂ ಓದುತ್ತೇನೆ  ಎಂದರಂತೆ !
ಆಯ್ಕೆ  ಮಾಡಿ, ತನ್ನದೇ ರಂಗ ಶೈಲಿಯಲ್ಲಿ  ಓದಿದ್ದಾರೆ ಕೂಡಾ  .  ನನ್ನ  ಮಣ್ಣ ಬಾಜನ  ಖುಷಿಯಿಂದ  ''ಟೈಂ ''  ಎಂದು ಎಂದಿಗಿಂತ ಉದ್ದುದ್ದ, ಉದ್ದದ ಮುದ್ದಾದ  ರಾಗ ಹೊರಡಿಸಿದ್ದು ನನ್ನ ಕಿವಿಯೊಳಗೆ ಇನ್ನೂ  ಗೂಂಗುನಿಸುತ್ತಿದೆ !
ಮೋಹನ್ ಅಣ್ಣ  ನಿಮಗಿದೋ ಅಭಿಮಾನ ಪೂರ್ವಕ ವಂದನೆಗಳು


ಶಾಂತಾರಾಮ್ ಶೆಟ್ಟಿ 

Comments

Popular posts from this blog

ದೈವದ ನುಡಿ

ಬಲೀಂದ್ರ ಲೆಪ್ಪು

ಮದಪೆರಾವಂದಿ ತುಳು ಪದೊಕುಲು ....ಗೊಂಚಿಲ್!.