'ಮಣ್ಣ ಬಾಜನದಲ್ಲಿ ಅಂತಹುದು ಏನಿದೆ ?'
'ಮಣ್ಣ ಬಾಜನದಲ್ಲಿ ಅಂತಹುದು ಏನಿದೆ ?' ಕೆಲವರದ್ದು ಕುತೂಹಲದ ಪ್ರೆಶ್ನೆ ?
ನಿಜವಾಗಿಯೂ ಅಂತಹುದು ಏನೂ ಇಲ್ಲ !
ಹೆಚ್ಚಿನ ತುಳು ಕವನ ಸಂಕಲನಗಳಲ್ಲಿ ಸಾಮಾನ್ಯವಾಗಿ ಇರುವಂತೆ ತುಳುನಾಡಿನ ವರ್ಣನೆಯಾಗಲಿ , ಹಸಿರಿನ ಪಸಿರಿನ ಸೊಬಗಾಗಲಿ ದೈವ ದೇವರ ಗುಣಗಾನವಾಗಲಿ ಯಾವುದೂ ಇಲ್ಲಿಲ್ಲ! .
ಇವೆಲ್ಲವನ್ನೂ ಬಿಟ್ಟು.....
ನಿಮ್ಮ - ನಮ್ಮ ಮನೆಯ ಪರಿಸರದ ದನ ನಾಯಿ ಕಾಗೆ ಅಥವಾ ನಮ್ಮ ಮನೆಯಂಗಳದ ಕೆಲಸದ ತನಿಯ, ನಮ್ಮೂರಿನ ದೈವದ ಕೋಲ ಕಟ್ಟುವ ದೋಗು , ಊರಿನ ಧಣಿ ಅಥವಾ ಅವರಿವರ ಮನೆಯಂಗಳಕ್ಕೆ ಅಡ್ಡಾಡಿ ಕ್ಷೇಮ ಸಮಾಚಾರ ವಿಚಾರಿಸುವುದೇ ಜೀವನವಾಗಿರುವ ಕರಿಯಜ್ಜ ಹೀಗೆ ನಮ್ಮ ನಮ್ಮ ನೋವು ನಲಿವುಗಳನ್ನೇ ಹಂಚಿಕೊಂಡ ಅಕ್ಷರಗಳು ಪದಗಳಾಗಿ ಮಣ್ಣ ಬಾಜನದೊಳಗಿರೋದು ! . ಹಾಗಾಗಿ ಬಹುಶ: ಇದನ್ನು ಓದುವಾಗ ನಿಮಗೆ ನಿಮ್ಮ ಮನೆ ಪರಿಸರ ಮನದೊಳಗೆ ಹಾಯಾಗಿ ನೀವೇ ಸಾಕಿದ ಮುದ್ದಿನ ಬೆಕ್ಕಿನಂತೆ ಅತ್ತಿಂದಿತ್ತ ಸುಳಿದಾಡುತ್ತದೆ ಅನ್ನುವುದು ನನ್ನ ನಂಬಿಕೆ .
ಗಜಲ್ ಬರಹ ತುಳುವಿಗೆ ತೀರಾ ಹೊಸದು . ಇತ್ತೀಚೆಗೆ ನಡೆಯುತ್ತಿರುವ ಹಲವಾರು ಹೊಸ ಪ್ರಯೋಗಗಳಲ್ಲಿ ಸ್ವಲ್ಪ ವಿಭಿನ್ನ ಕೂಡಾ . ಶ್ರೀಮತಿ ವಿಜಯಲಕ್ಷ್ಮಿ ಕಟೀಲು ಅವರು ಈ ಭಿನ್ನ ಗಜಲ್ ಬರಹಗಳಲ್ಲಿ ನುರಿತ ಕೈ . ಮೂಲತಃ ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಇವರು ಕವನಗಳನ್ನು ಓದುವ ಮತ್ತು ಹಾಡುವ ರೀತಿ ಅನನ್ಯ ಮತ್ತು ಮಾನ್ಯ . ಅಕ್ಷತರಾಜ್ ಪೆರ್ಲ ಆರಂಭಿಸಿದ ಯಶಸ್ವಿ ತುಳು ಕಬಿತೆ ಸಂಚಿಯಲ್ಲಿ ಕವನ ಓದುವ ಒಂದು ಹೊಸ ಬಗೆಯನ್ನು ನಾವು ಪ್ರಯತ್ನ ಪಟ್ಟೆವು . ಅದಕ್ಕೆ ಜೀವ ತುಂಬಿದವರು ಮುಂಬೈ ರಂಗ ಕಲಾವಿದ ಸುರೇಂದ್ರ ಮಾರ್ನಾಡು. ಅದು ಈಗ ಎಲ್ಲಾ ಯುವ ಮನಸ್ಸುಗಳನ್ನು ತಟ್ಟಿದೆ ಅನ್ನುವುದಕ್ಕೆ ಮಕ್ಕಳೂ ಕವನ ಓದುವುದಕ್ಕೆ ಇಷ್ಟ ಪಡುವುದು ಸಾಕ್ಷಿ . ಇದು ನಿಜವಾಗಿಯೂ ಭಾಷೆಯ ಬೆಳವಣಿಗೆಯ ಹಾದಿ !
ವಿಜಯಲಕ್ಷ್ಮಿ ಕಟೀಲು ಕೂಡಾ ಮಣ್ಣ ಬಾಜನದ ಒಂದು ಹಾಡಿಗೆ ತನ್ನ ಧ್ವನಿಯ ಏರಿಳಿತ , ಹಾವ ಭಾವಗಳಿಂದ ಜೀವ ತುಂಬಿದ್ದಾರೆ . ಕವನ ವಾಚನವೆಂದರೆ ಬೇಸರಿಸುವವರನ್ನೂ ಒಮ್ಮೆ ಕಿವಿಗೊಟ್ಟು ಕೇಳುವಂತೆ ದಿವ್ಯವಾಗಿ ಮತ್ತು ಸಹ್ಯವಾಗಿ ಓದಿದ್ದಾರೆ!.
ಧಣಿ ದೀನ ನುಪ್ಪುನು ನಾಯಿ ಆನಿ ಉಂಡುಜಿ
ದಾಯೆಗ್ ೦ದ್ ಎರೆಡಲಾ ಪಂಡಿಜಿ !
ನಾಯಿಯ ಮೌನ ಪ್ರತಿಭಟನೆಗೆ ಬೆಲೆ ಅಷ್ಟಕಷ್ಟೆ !
ಬಹುಶ ನಮ್ಮ ನಮ್ಮ ಮನೆಯ ನಾಯಿಯ ( ಕಂಟ್ರಿ ಬ್ರೀಡು ) ಎದುರು ಈ ಕವನ ಓದಿದರೆ ಅದೂ ಗಮನವಿಟ್ಟು ಕೇಳಿ
''ಇದು ನನ್ನದೇ ಕತೆ , ನನ್ನ ಮಗನ ಮನೆಯಲ್ಲೂ ಮೊನ್ನೆ ಹೀಗೆ ಆಯ್ತು! '' ಎಂದು ಬಾಲ ಅಲ್ಲಾಡಿಸಿದರೆ ನೀವೇನೂ ಆಶರ್ಯ ಪಡಬೇಕಾಗಿಲ್ಲ !
ಒಮ್ಮೆ ಕೇಳಿ ನೋಡಿ ಎನ್ನುವುದು ಸವಿನಯ ಪ್ರಾರ್ಥನೆ
ಶಾಂತಾರಾಮ್ ಶೆಟ್ಟಿ
( ಕನ್ನಡದವರೂ ಈ ತುಳು ಕಬಿತೆ ಸಂಚಿಗೆ ತುಂಬಾ ಬೆಂಬಲಕೊಡುತ್ತಿರುವುದರಿಂದ ಕನ್ನಡದಲ್ಲಿ ಬರೆದೆ)
ನಿಜವಾಗಿಯೂ ಅಂತಹುದು ಏನೂ ಇಲ್ಲ !
ಹೆಚ್ಚಿನ ತುಳು ಕವನ ಸಂಕಲನಗಳಲ್ಲಿ ಸಾಮಾನ್ಯವಾಗಿ ಇರುವಂತೆ ತುಳುನಾಡಿನ ವರ್ಣನೆಯಾಗಲಿ , ಹಸಿರಿನ ಪಸಿರಿನ ಸೊಬಗಾಗಲಿ ದೈವ ದೇವರ ಗುಣಗಾನವಾಗಲಿ ಯಾವುದೂ ಇಲ್ಲಿಲ್ಲ! .
ಇವೆಲ್ಲವನ್ನೂ ಬಿಟ್ಟು.....
ನಿಮ್ಮ - ನಮ್ಮ ಮನೆಯ ಪರಿಸರದ ದನ ನಾಯಿ ಕಾಗೆ ಅಥವಾ ನಮ್ಮ ಮನೆಯಂಗಳದ ಕೆಲಸದ ತನಿಯ, ನಮ್ಮೂರಿನ ದೈವದ ಕೋಲ ಕಟ್ಟುವ ದೋಗು , ಊರಿನ ಧಣಿ ಅಥವಾ ಅವರಿವರ ಮನೆಯಂಗಳಕ್ಕೆ ಅಡ್ಡಾಡಿ ಕ್ಷೇಮ ಸಮಾಚಾರ ವಿಚಾರಿಸುವುದೇ ಜೀವನವಾಗಿರುವ ಕರಿಯಜ್ಜ ಹೀಗೆ ನಮ್ಮ ನಮ್ಮ ನೋವು ನಲಿವುಗಳನ್ನೇ ಹಂಚಿಕೊಂಡ ಅಕ್ಷರಗಳು ಪದಗಳಾಗಿ ಮಣ್ಣ ಬಾಜನದೊಳಗಿರೋದು ! . ಹಾಗಾಗಿ ಬಹುಶ: ಇದನ್ನು ಓದುವಾಗ ನಿಮಗೆ ನಿಮ್ಮ ಮನೆ ಪರಿಸರ ಮನದೊಳಗೆ ಹಾಯಾಗಿ ನೀವೇ ಸಾಕಿದ ಮುದ್ದಿನ ಬೆಕ್ಕಿನಂತೆ ಅತ್ತಿಂದಿತ್ತ ಸುಳಿದಾಡುತ್ತದೆ ಅನ್ನುವುದು ನನ್ನ ನಂಬಿಕೆ .
ಗಜಲ್ ಬರಹ ತುಳುವಿಗೆ ತೀರಾ ಹೊಸದು . ಇತ್ತೀಚೆಗೆ ನಡೆಯುತ್ತಿರುವ ಹಲವಾರು ಹೊಸ ಪ್ರಯೋಗಗಳಲ್ಲಿ ಸ್ವಲ್ಪ ವಿಭಿನ್ನ ಕೂಡಾ . ಶ್ರೀಮತಿ ವಿಜಯಲಕ್ಷ್ಮಿ ಕಟೀಲು ಅವರು ಈ ಭಿನ್ನ ಗಜಲ್ ಬರಹಗಳಲ್ಲಿ ನುರಿತ ಕೈ . ಮೂಲತಃ ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಇವರು ಕವನಗಳನ್ನು ಓದುವ ಮತ್ತು ಹಾಡುವ ರೀತಿ ಅನನ್ಯ ಮತ್ತು ಮಾನ್ಯ . ಅಕ್ಷತರಾಜ್ ಪೆರ್ಲ ಆರಂಭಿಸಿದ ಯಶಸ್ವಿ ತುಳು ಕಬಿತೆ ಸಂಚಿಯಲ್ಲಿ ಕವನ ಓದುವ ಒಂದು ಹೊಸ ಬಗೆಯನ್ನು ನಾವು ಪ್ರಯತ್ನ ಪಟ್ಟೆವು . ಅದಕ್ಕೆ ಜೀವ ತುಂಬಿದವರು ಮುಂಬೈ ರಂಗ ಕಲಾವಿದ ಸುರೇಂದ್ರ ಮಾರ್ನಾಡು. ಅದು ಈಗ ಎಲ್ಲಾ ಯುವ ಮನಸ್ಸುಗಳನ್ನು ತಟ್ಟಿದೆ ಅನ್ನುವುದಕ್ಕೆ ಮಕ್ಕಳೂ ಕವನ ಓದುವುದಕ್ಕೆ ಇಷ್ಟ ಪಡುವುದು ಸಾಕ್ಷಿ . ಇದು ನಿಜವಾಗಿಯೂ ಭಾಷೆಯ ಬೆಳವಣಿಗೆಯ ಹಾದಿ !
ವಿಜಯಲಕ್ಷ್ಮಿ ಕಟೀಲು ಕೂಡಾ ಮಣ್ಣ ಬಾಜನದ ಒಂದು ಹಾಡಿಗೆ ತನ್ನ ಧ್ವನಿಯ ಏರಿಳಿತ , ಹಾವ ಭಾವಗಳಿಂದ ಜೀವ ತುಂಬಿದ್ದಾರೆ . ಕವನ ವಾಚನವೆಂದರೆ ಬೇಸರಿಸುವವರನ್ನೂ ಒಮ್ಮೆ ಕಿವಿಗೊಟ್ಟು ಕೇಳುವಂತೆ ದಿವ್ಯವಾಗಿ ಮತ್ತು ಸಹ್ಯವಾಗಿ ಓದಿದ್ದಾರೆ!.
ಧಣಿ ದೀನ ನುಪ್ಪುನು ನಾಯಿ ಆನಿ ಉಂಡುಜಿ
ದಾಯೆಗ್ ೦ದ್ ಎರೆಡಲಾ ಪಂಡಿಜಿ !
ನಾಯಿಯ ಮೌನ ಪ್ರತಿಭಟನೆಗೆ ಬೆಲೆ ಅಷ್ಟಕಷ್ಟೆ !
ಬಹುಶ ನಮ್ಮ ನಮ್ಮ ಮನೆಯ ನಾಯಿಯ ( ಕಂಟ್ರಿ ಬ್ರೀಡು ) ಎದುರು ಈ ಕವನ ಓದಿದರೆ ಅದೂ ಗಮನವಿಟ್ಟು ಕೇಳಿ
''ಇದು ನನ್ನದೇ ಕತೆ , ನನ್ನ ಮಗನ ಮನೆಯಲ್ಲೂ ಮೊನ್ನೆ ಹೀಗೆ ಆಯ್ತು! '' ಎಂದು ಬಾಲ ಅಲ್ಲಾಡಿಸಿದರೆ ನೀವೇನೂ ಆಶರ್ಯ ಪಡಬೇಕಾಗಿಲ್ಲ !
ಒಮ್ಮೆ ಕೇಳಿ ನೋಡಿ ಎನ್ನುವುದು ಸವಿನಯ ಪ್ರಾರ್ಥನೆ
ಶಾಂತಾರಾಮ್ ಶೆಟ್ಟಿ
( ಕನ್ನಡದವರೂ ಈ ತುಳು ಕಬಿತೆ ಸಂಚಿಗೆ ತುಂಬಾ ಬೆಂಬಲಕೊಡುತ್ತಿರುವುದರಿಂದ ಕನ್ನಡದಲ್ಲಿ ಬರೆದೆ)
Comments
Post a Comment