H M Mahesh

 ಸಂಗೀತವನ್ನು ''ಸಂಗೀತಾ'' ದಿಂದ  ಮನೆ  ಮನ ಮುಟ್ಟಿಸಿದ ತುಳುನಾಡಿನ  ಹೆಮ್ಮೆ  H . M.  ಮಹೇಶ್!.  

------------------------------------

ಈ ಮಹಾನ್ ಮಹಾಲಿಂಗ  ಹುಟ್ಟಿರದಿರುತ್ತಿದ್ದರೆ ನಾವೆಲ್ಲಾ ''ಗಜಮುಖನೆ ಗಣಪತಿಯೇ ನಿನಗೆ ವಂದನೆ'', ''ಶರಣು ಶರಣಯ್ಯ ಶರಣು ಬೆನಕ'' ದಂತಹ  ಎಷ್ಟೋ ಹಳೆಯ ಸುಮಧುರ ಕನ್ನಡದ ಹಾಡುಗಳನ್ನು ಇವತ್ತಿಗೂ  ಕೇಳಲಾಗದ ಶಾಶ್ವತ  ಕಿವುಡರಾಗಿರಬೇಕಾಗಿತ್ತು!.  

ಅದರಲ್ಲೂ ತುಳು ಭಾಷಿಗರಂತೂ  ಈ   ಸಂಗೀತಾ ಮಹಾತ್ಮನನ್ನು ಮರೆಯಲೇ ಬಾರದಿತ್ತು!.

ಆದರೂ ಮರೆತಿದ್ದೇವೆ ಅನ್ನುವುದು ಕೂಡಾ ಅರಗಿಸಲಾಗದ ಸತ್ಯ . 

ವೇದಿಕೆಗಳಲ್ಲಿ ಅಬ್ಬರಿಸಿ ಬೊಬ್ಬಿರಿಯುವ  ನಿರೂಪಕರಾಗಲಿ , ಅವರಿಂದಲೇ ಬೆಳಗಿ ಬೆಳೆದ  ಹಾಡುಗಾರರಾಗಲಿ ಯಾರೂ  ಈ ಮಹಾಲಿಂಗನ  ಹೆಸರನ್ನು ಕಾಟಚಾರಕ್ಕೂ ಎಲ್ಲೂ ನೆನೆಯದೆ  ಪುನೀತರಾಗುವುದು  ಈ ಪ್ರಕೃತಿಯ ಅಗಣಿತ ಅಚ್ಚರಿಗಳಲ್ಲಿ ಒಂದು.

 ''ಪಕ್ಕಿಲು ಮೂಜಿ ಒಂಜೇ ಗೂಡುಡು ಬದುಕೊಂದುಲ್ಲಗೆ ''   ಇದು ನನ್ನ ಸಂಸಾರದ ಪ್ರೀತಿ ಗೀತೆ , ''ಕೆಮ್ಮಲೆತ ಬ್ರಹ್ಮ ನನ್ನ  ಅಸ್ಮಿತೆ'' , ''ಡಿಂಗಿರಿ ಮಾಮ ಡಿಂಗಿರಿ  ಮಾಮ''   ನಮ್ಮ ತುಳುನಾಡ ಉತ್ತರಕುಮಾರ   ವೀರಗಾಥೆ, ''ಪೊನ್ನ ತೆಲಿಕೆಗ್ ಅರಲು ಮಲ್ಲಿಗೆ'',  ''ನೀರ್ ಡೇ  ನೀಲ ಬಾನೊದ  ಬಿಂಬ'', ''ಇಂಪು ತಂಪು  ಜಾಗೆ ಉಂದು  ಸ್ವರ್ಗಯಾ'',ನನ್ನನ್ನು ಸದಾ ಬಿಡದೆ  ಕಾಡುವ  ಪ್ರೇಮಗೀತೆ,  '' ಸಾಲ ಮೂಲ  ಮಲ್ತ್ ದ್  ಗೊಬ್ಬುನಾ''  ಎನ್ನುವುದು ನನ್ನ ನಾಟಕ ಹವ್ಯಾಸದ ನಾಡಗೀತೆ  ಎಂದೆಲ್ಲಾ  ಈ  ಸಾರ್ವಕಾಲಿಕ ಸುಮಧುರ  ಗೀತೆಗಳ ಜೊತೆಗೆ ತಮ್ಮನ್ನು  ನಂಟು ಹಾಕಿಕೊಳ್ಳುವ  ಕೆಲವರಲ್ಲಿ  ಒಬ್ಬನಾದರೂ  ಈ ಮಹಾಲಿಂಗನ ನೆನಪನ್ನು  ಕ್ಷಣಕಾಲವಾದರೂ  ಯಾವುದೇ  ಸಂಗೀತದ ವೇದಿಕೆಯಲ್ಲಿ ಸ್ಮರಿಸಿದರೆ  ಅದು ಈ ಮಹಾನ್ ಸಾಧಕನಿಗೆ ನಾವು ಕೊಡಬಹುದಾದ ಕನಿಷ್ಠ ಗೌ ರವವಾಗುತ್ತಿತ್ತು.  

ಸುಮಾರು ಇಪ್ಪತ್ತಕ್ಕಿಂತಲೂ ಹೆಚ್ಚು ಸುಪ್ರಸಿದ್ಧ  ತುಳು ಸಿನಿಮಾ ಹಾಡುಗಳನ್ನು ಹಾಡಿದ ಈ  ಮಹಾಲಿಂಗನೇ ಅಂದಿನ  ತುಳುಗೀತೆಗಳ  ಸುಮಧುರ ಕಂಠ  H. M.ಮಹೇಶ್.  

ಹಿಂದಿ ಚಿತ್ರರಂಗದ ಮುಕೇಶ್ ಅವರ ಹೋಲಿಕೆಯಲ್ಲೇ  ಹಾಡುತ್ತಿದ್ದ  ಮಹಾಲಿಂಗ  ಮುಕೇಶ್  ಮೇಲಿನ  ಗೌರವಕ್ಕೋಸ್ಕರ ತನ್ನ ಹೆಸರನ್ನೂ  ಮಹೇಶ್ ಎಂದು ಬದಲಾಯಿಸಿಕೊಂಡ ಸಂಗೀತಾಭಿಮಾನಿ. 

ಕಾಸರಗೋಡಿನ  ಬದಿಯಡ್ಕದ  ಕಾನ   ಗ್ರಾಮದಲ್ಲಿ ಹುಟ್ಟಿ  ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ  ವಿಜ್ಞಾನದ ವಿದ್ಯಾರ್ಥಿಯಾಗಿದ್ದ  ಮಹಾಲಿಂಗನಿಗೆ  ಸಾರ್ವಜನಿಕ ವೇದಿಕೆಯಲ್ಲಿ ಮೊದಲು  ಅವಕಾಶ ಕೊಟ್ಟಿದ್ದು ಮಂಗಳೂರಿನ  ಅಂದಿನ  ಪ್ರಖ್ಯಾತ ವಾದ್ಯವೃಂದದ ಅಶೋಕ್ ಚರಣ್ ಅವರು. ಮುಂದೆ ತಮ್ಮ ಸಂಗೀತ ನಿರ್ದೇಶನದ  ''ಬೊಳ್ಳಿದೋಟ''  ಚಿತ್ರದಲ್ಲಿಯೂ  ಹಾಡಿಸಿದರು.  

ತಾನೊಬ್ಬ ಖ್ಯಾತ ಗಾಯಕನಾಗಬೇಕು  ಎನ್ನುವ  ಉತ್ಕಟ  ಹಂಬಲದೊಂದಿಗೆ  ಬೆಂಗಳೂರು  ಮದರಾಸ್ ನಡುವೆ ಜೋಲಿ ಹೊಡೆಯುತ್ತಿದ್ದ  HMM  ಅವರನ್ನು  ದಕ್ಷಿಣಭಾರತದ  ಪ್ರಖ್ಯಾತ  AVM  ಸ್ಟುಡಿಯೋ  ಮಾಲಕ ಮೇಯಪ್ಪ ಚೆಟ್ಟಿಯಾರರಿಗೆ  ಪರಿಚಯಿಸಿದ  ಪುಣ್ಯ ಚಿ.ಉದಯಶಂಕರ್ ಅವರಿಗೆ ಸಲ್ಲಬೇಕು. 

AVM  ಸ್ಟುಡಿಯೋದ  ಮಾರುಕಟ್ಟೆಯನ್ನು  ನಿಭಾಯಿಸುತ್ತಿದ್ದ ಸರಸ್ವತಿ  ಸ್ಟೋರಿನಲ್ಲಿ     ದಕ್ಷಿಣದ  ಎಲ್ಲಾ  ಭಾಷೆಗಳ   ಹಾಡುಗಳ ನಿರ್ಮಾಣಕ್ಕೆ  ಪ್ರತ್ಯೇಕ ವಿಭಾಗಳಿದ್ದರೂ  ಕನ್ನಡವನ್ನು  ಮ್ಯಾನೇಜರ್  ಕಣ್ಣನ್  ಸ್ವತಃ ನೋಡಿಕೊಳ್ಳುತ್ತಿದ್ದರು .   ಕನ್ನಡಕ್ಕೆ ಮಾರುಕಟ್ಟೆ ಇಲ್ಲ  ಎನ್ನುವ ಅಸಡ್ಡೆಯಿಂದ   ಕನ್ನಡ ವಿಭಾಗವನ್ನು  ಮುಚ್ಚಿ ಬಿಡುವ   ನಿರ್ಧಾರದಲ್ಲಿದ್ದಾಗ   ಚೆಟ್ಟಿಯಾರ್ ರವರಿಗೆ  ಕನಿಷ್ಠ  ಮುನ್ನೂರು  ಗ್ರಾಮೋಫೋನ್  ಪ್ಲೇಟ್ ಮಾರಾಟ ಮಾಡಿಕೊಡುವ  ವಾಗ್ದಾನದೊಂದಿಗೆ   ಮೊದಲ ಪ್ರಯತ್ನದಲ್ಲೇ  ಒಂದು ಸಾವಿರದ  ಗಡಿ ದಾಟಿಸಿ  ಕನ್ನಡಕ್ಕೂ  ಮಾರುಕಟ್ಟೆ ಇದೆ ಎಂದು  ಸಾಧಿಸಿ ತೋರಿಸಿದ  ಛಲಗಾರ  ಈ   ಮಹೇಶ್ . ಮುಚ್ಚಬೇಕಾಗಿದ್ದ  ವಿಭಾಗದಲ್ಲಿ  ಕನ್ನಡದ ಮಾರುಕಟ್ಟೆಯನ್ನು  ಭದ್ರಗೊಳಿಸಿದ  ಕೀರ್ತಿ   ''ಗಜಮುಖನೆ  ಗಣಪತಿಯೇ ನಿನಗೆ ವಂದನೆ'' ಮತ್ತು ''ವಾರ  ಬಂತಮ್ಮಾ''  ಹಾಡುಗಳಿಗೆ  ಸಲ್ಲಬೇಕು. 

 ಈ ಮಹಾಲಿಂಗ ಸಾಧನೆಗಳ  ಎಚ್ಚಮ!.(HMM ) 

ನಿಮಗೆಲ್ಲಾ  ಗೊತ್ತಿರಬೇಕು  ಹಿಂದಿನ ಗ್ರಾಮೊಫೋನುಗಳು   ಒಂದು ಬದಿಯಲ್ಲಿ 3 ನಿಮಿಷ  20 ಸೆಕೆಂಡಿನಷ್ಟು  ಮಾತ್ರ ಧ್ವನಿಗ್ರಹಣವನ್ನು   ಹಿಡಿದಿಟ್ಟುಕೊಳ್ಳುತ್ತಿದ್ದವು.    ಹಾಗಾಗಿ   ಎರಡು ಬದಿಯಲ್ಲಿ ಎರಡು ಹಾಡುಗಳನ್ನು ಮಾತ್ರ  ಧ್ವನಿಗ್ರಹಿಸುತ್ತಿದ್ದರು. ನಿಮಗೀಗ ಅರ್ಥವಾಗಬಹುದು,  ಹಿಂದಿನ ಎಲ್ಲಾ ಹಾಡುಗಳು  ಮೂರು ನಿಮಿಷದ ಆಸುಪಾಸಿನಲ್ಲಿ ಇರುತ್ತಿರುವುದು ಇದೇ ಕಾರಣಕ್ಕಾಗಿ. ಅದಕ್ಕಿಂತ  ಜಾಸ್ತಿಯಿದ್ದ ಹಾಡುಗಳು ಆಕಸ್ಮಿಕವಾಗಿ  ತಟ್ಟನೆ ಕೊನೆಗೊಳ್ಳುತ್ತಿದ್ದದು  ನಿಮ್ಮ ಅನುಭವಕ್ಕೂ  ಬಂದಿರಬಹುದು  . 

ಚೆಟ್ಟಿಯಾರರ  ನಂಬಿಕೆಗೆ ಒಳಪಟ್ಟ  ಮಹೇಶ್   ಸೂಪರ್7,Extended Player  , Long Player  ತಾಂತ್ರಿಕತೆಗಳನ್ನು ಬಳಸಿಕೊಂಡು  ಏಳು ನಿಮಿಷಗಳ  ಈ ಅವಧಿಯನ್ನು  18 ರಿಂದ  45  ನಿಮಿಷಗಳ ವರೆಗೂ ವಿಸ್ತರಿಸುವಲ್ಲಿ  ಯಶಸ್ವಿ ಯಾದರು. ''ವಾರ ಬಂತಮ್ಮಾ''  ಅಂತಹ  45  ನಿಮಿಷಗಳ ಮೊದಲ  LPಯಾಗಿ  HMM  ಪ್ರಯತ್ನದಲ್ಲಿ ಮಾರುಕಟ್ಟೆಗೆ  ಬಂದ  ಮೊದಲ Disc  ಸುಮಾರು  ಮೂರು ಸಾವಿರದಷ್ಟು ಮಾರಾಟವಾಗಿ ಮಾರುಕಟ್ಟೆಯಲ್ಲಿ  ಸಂಚಲನ ಸೃಷ್ಟಿಸಿದ  ಹೆಮ್ಮೆ ಈ ಕನ್ನಡ ಭಕ್ತಿ ಗೀತೆಯದ್ದು  . 

ಕನ್ನಡದ ಹಾಡುಗಳು  ಮೊದಲು ಯಾವ ಆಕಾಶವಾಣಿಯಲ್ಲಿ ಪ್ರಸಾರವಾದವು ? ಎಂದರೆ  ಹೆಚ್ಚಿವನವರ ಉತ್ತರ  ಬೆಂಗಳೂರು,  ಭದ್ರಾವತಿ  ಎಂದು ಇರಬಹುದು , ಹಾಗೆಯೇ ತುಳು  ಹಾಡುಗಳನ್ನು ಪ್ರಸಾರ ಮಾಡುತ್ತಿದ್ದ  ಕೇಂದ್ರ  ಮಂಗಳೂರು ಆಕಾಶವಾಣಿ  ಎಂದು ನೀವು ಹೇಳುವುದಾದರೆ ನಿಮಗೊಂದು ಆಶ್ಚರ್ಯದ ಸುದ್ದಿ ಇಲ್ಲಿದೆ!.


ರೇಡಿಯೋ ಸಿಲೋನ್  ಎಂಬ ಮಾಯೆ

-------------------------------------------    

ನೀವು 60-70ರ ದಶಕದಲ್ಲಿ ರೇಡಿಯೋ ಕೇಳುವವರಾಗಿದ್ದರೆ   ''ತುಳಸಿ ಸಮೀರ''  ಮತ್ತು ''ಮೀನಾಕ್ಷಿ ಪೊಣ್ಣು ದೊರೈ''  ಎಂಬ ಇಬ್ಬರು ಮಹಿಳಾ ರೇಡಿಯೋ  ಉದ್ಘೋಷಕಿಯರ   ವಿಚಿತ್ರ  ಕನ್ನಡವನ್ನು  ಕೇಳಿಯೇ ಇರುತ್ತೀರಿ.ಅವತ್ತಿಗೆ  ರೇಡಿಯೋ ಸಿಲೋನ್ ನಲ್ಲಿ ಇವರ ಕನ್ನಡ ಕೇಳುವುದೇ  ಒಂದು ಕಚಗುಳಿ!.   

ರೇಡಿಯೋ ಸಿಲೋನ್  ಕಚೇರಿ  ಮದ್ರಾಸಿನಲ್ಲಿ  ಇದ್ದುದರಿಂದ  HMM ಅವರನ್ನು ಸಂಪರ್ಕಿಸಿ  ಕನ್ನಡ ಮತ್ತು  ತುಳು ಚಿತ್ರಗೀತೆಗಳು  ಮೊತ್ತ ಮೊದಲ ಬಾರಿಗೆ  ಅಲ್ಲಿ  ಪ್ರಸಾರವಾಗುವಂತೆ   ಪ್ರಯತ್ನ ಪಟ್ಟುದಲ್ಲದೆ  ವಾರಕ್ಕೆ ಒಂದು ಸಾರಿ  ಹದಿನೈದು ನಿಮಿಷ ಪ್ರಸಾರವಾಗುತ್ತಿದ್ದುದ್ದನ್ನು  ದಿನಾ ಅರ್ಧ ಗಂಟೆ  ಪ್ರಸಾರವಾಗುವಂತೆ  ನೋಡಿಕೊಂಡರು!. 

ಹಿನ್ನಲೆ ಗಾಯಕನಾಗುವ ಕನಸು ಮನಸ್ಸಲ್ಲಿ ಇಟ್ಟು ಕೊಂಡಿದ್ದ ಮಹೇಶ್ ಅವರು  ಅವಕಾಶ ಸಿಕ್ಕಿದಾಗಲೆಲ್ಲಾ  ಹಾಡುವ ಹವ್ಯಾಸ  ಬೆಳೆಸಿಕೊಂಡು ಬಂದರು . ತುಳು ಚಿತ್ರ  ನಿರ್ಮಾಪಕರು  ಮದ್ರಾಸಿಗೆ ಬಂದಾಗ  budget  friendly  ಸಂಗೀತ ನಿರ್ದೇಶಕ  ಉಪೇಂದ್ರ ಕುಮಾರ್  ಅವರನ್ನು  ಪರಿಚಯಿಸಿ ಸಹಾಯ ಮಾಡುತ್ತಿದ್ದರು. ಹಾಗಾಗಿ  ಬಿಸತ್ತಿ ಬಾಬು , ಯಾನ್ ಸನ್ಯಾಸಿ ಆಪೆ , ಏರ್ ಮಲ್ತಿನ ತಪ್ಪು , ಬಯ್ಯ ಮಲ್ಲಿಗೆ , ನ್ಯಾಯೋಗು ಜಿಂದಾಬಾದ್ ,ಭಾಗ್ಯವಂತೆದಿ  ಮುಂತಾದ ಚಿತ್ರಗಳಲ್ಲಿ  ಉಪೇಂದ್ರ ಕುಮಾರ್  ಸಂಗೀತ ನಿರ್ದೇಶಕರು  ಮತ್ತು ಹೆಚ್ಚಿನ ಎಲ್ಲ ಚಿತ್ರಗಳಲ್ಲಿ ಈ ಜೋಡಿ ಕೆಲಸ ಮಾಡಿರುವುದು. 

ಸುಮಾರು  ಇಪ್ಪತ್ತಕ್ಕಿಂತಲೂ  ಅಧಿಕ ತುಳು ಹಾಡುಗಳಿಗೆ  ಧ್ವನಿ ನೀಡಿದ ಎಚ್ ಎಂ  ಮಹೇಶ್,  ಬಿ ವಸಂತ  ಜೊತೆ ಹಾಡಿದ   ''ಪಕ್ಕಿಲು ಮೂಜಿ ಒಂಜೇ ಗೂಡುಡು'' ಹಾಡಿನ ಮೂಲಕ  ತುಳುವರೆಂದು ತುಳುವರಿಗೆ ತಿಳಿಯದೆ  ಮನೆ  ಮಾತಾದವರು.

ಕೋಟಿ  ಚೆನ್ನಯ ಸಿನಿಮಾದ  ''ಕೆಮ್ಮಲತಾ  ಬ್ರಹ್ಮ'' ಸಾರ್ವಕಾಲಿಕ  ನೆನಪಿನ ತುಳುಹಾಡಿನಲ್ಲಿ ತಮ್ಮ ಚೆನ್ನಯನ ಧ್ವನಿಯಾಗಿ  ಪಿಬಿ ಶ್ರೀನಿವಾಸ್ ಅವರಿಗೆ ಜೊತೆಯಾದವರು. ಕನ್ನಡದಲ್ಲೂ  ಹೃದಯ ಸಂಗಮ  ಚಿತ್ರದಲ್ಲಿ  ''ಗಂಧದ ನೆರಿಗ್ಯೋಳೆ''  ಎಂಬ ಹಾಡನ್ನು  ಹಾಡಿ ತನ್ನ ಹಿನ್ನಲೆ ಗಾಯನದ  ಹೊಸ ಅಧ್ಯಾಯ  ತೆರೆಯುವಷ್ಟರಲ್ಲಿ  ಸರಸ್ವತಿ ಸ್ಟೋರಿನ  ಇತರ ಆಧಿಕಾರಿಗಳ   ಈರ್ಷ್ಯೆಯಿಂದ  ಸಂಸ್ಥೆಯವರು ''ಹಾಡಬಾರದು'' ಎನ್ನುವ ಕರಾರಿಗೆ ಒಳಗಾಗಿ  ಕಮರಿದವರು. 

ಸರಸ್ವತಿ ಸ್ಟೋರಿನ  ಉಸಿರುಗಟ್ಟಿಸುವ ನಂಜಿನ  ವಾತಾವರಣದಿಂದ ಹೊರಬಂದ ಮಹೇಶ್  ಆಗಷ್ಟೇ  ತಾಂತ್ರಿಕವಾಗಿ  ಉತ್ಕರ್ಷಗೊಂಡ  ಕ್ಯಾಸೆಟ್ ರೆಕಾರ್ಡಿಂಗ್  ಯಂತ್ರವನ್ನು ಜಪಾನಿನಿಂದ ತರಿಸಿಕೊಂಡು ಮಾಸ್ಟರ್ ರೆಕಾರ್ಡಿಂಗ್  ಕಂಪನಿಯನ್ನು  ಹುಟ್ಟುಹಾಕಿ ''ಸಂಗೀತಾ'' ಹೆಸರಿನಲ್ಲಿ1980ರಲ್ಲಿ ದಕ್ಷಿಣ ಭಾರತದ ಮೊದಲ ಕ್ಯಾಸೆಟ್ ಕಂಪನಿ ಎಂಬ ಹೆಗ್ಗಳಿಕೆಯೊಂದಿಗೆ  ''ಬಾಳೆ ಬಂಗಾರವಾಯಿತು''  ಕ್ಯಾಸೆಟ್  ಬಿಡುಗಡೆ ಗೊಳಿಸಿದರು. 1990 ರಲ್ಲಿ  VIJAYA SSS  ತಮ್ಮದೇ ಸ್ಟುಡಿಯೋ  ಸ್ಥಾಪಿಸಿ ಡಾ. ರಾಜ್ ಅವರಿಂದ  ದೀಪ ಬೆಳಗಿಸಿ  ಆರಂಭಿಸಿದ  ಮಹೇಶ್  ಗ್ರಾಮೋಫೋನ್ ತಟ್ಟೆಗಳಿಂದ ಆರಂಭಿಸಿ  cassettes, CD ಗಳ ವರೆಗೂ ಸಂಗೀತಾ  ಸಂಸ್ಥೆಯನ್ನು ಬೆಳೆಸಿಕೊಂಡು ಬಂದು  1992ರಲ್ಲಿ  ಬಂಗಾರಪ್ಪನವರಿಂದ  ರಾಜ್ಯೋತ್ಸವ ಪ್ರಶಸ್ತಿಗೆ ಬಾಜನರಾದವರು. 

 ಇಷ್ಟೆಲ್ಲಾ ಸಾಧನೆಗಳ ನಡುವೆ  ಮಹೇಶ್ ಅವರ ನಿಸ್ವಾರ್ಥಕ್ಕೆ ಪುಟವಿಡುವ ಬೆಳವಣಿಗೆಯೊಂದಿದೆ 

ಹಲವಾರು  ಗಾಯಕ ಗಾಯಕಿಯರ ಧ್ವನಿಯನ್ನು , ಸ್ಯಾಕ್ಸೋಫೋನ್ , ಮ್ಯಾಂಡೊಲಿನ್ , ಹರಿಕಥೆ , ಯಕ್ಷಗಾನ  ಕಲಾವಿದರನ್ನು   ಮನೆ ಮನೆಗೆ ಪರಿಚಯಿಸಿದ  ಮಹೇಶ್ ಮನಸ್ಸು ಮಾಡಿದ್ದರೆ  ತನ್ನ  ಬದುಕಿನ  ಆದಮ್ಯ ಆಸೆಯಾಗಿದ್ದ  ತಾನು ಗಾಯಕನಾಗುವ  ಕನಸ್ಸನ್ನು   ತನ್ನ ಸ್ವಂತ ಸಂಸ್ಥೆ ಸಂಗೀತದ ಮೂಲಕ ನೆರವೇರಿಸಿಕೊಂಡು ಹಲವಾರು  ಧ್ವನಿ ಸುರುಳಿಗಳನ್ನು  ಸೃಷ್ಟಿಸಿ ವಿಜೃಂಭಿಸಬಹುದಿತ್ತು . ಆದರೆ ಮಹೇಶ್  ತಾನು ತೇದು ಬೇರೆಯವರಿಗೆ  ಘಮಿಸುವ ಸುಗಂಧವಾದರು.  

ಹರಿಯಪ್ಪನ ಮೂಡಕರೆಯ (H M ) ನಾರಾಯಣ ಭಟ್  ಮತ್ತು ವೆಂಕಟೇಶ್ವರಿಯವರಿಂದ ಕೇಳಿದ   ಜೋಗುಳದ ಹಾಡಿನ ಕಂಪನ್ನು ವಿಶ್ವಕ್ಕೆ ಪಸರಿಸಿದ HMM ಅವರ ಸುದೀರ್ಘ  ಸಾರ್ಥಕ  ಎಂಟು  ದಶಕಗಳ (14-2-1944 to 4-3-2022) ಸಂಗೀತ ಜೀವನವನ್ನು ಅಭಿಮಾನ ಪೂರ್ವಕವಾಗಿ  ನೆನೆದು ,ತುಳು ಭಾಷೆಗೆ ಅವರು  ನೀಡಿದ  ಅನನ್ಯ ಸೇವೆಯನ್ನು  ಶಾಶ್ವತವಾಗಿರಿಸುವಂತಹ  ಪ್ರಯತ್ನದೆಡೆಗೆ ಸಾಗುವ ಪ್ರಯತ್ನ,  ಮರೆತವರನ್ನು ಮತ್ತೆ ಮೆರೆಯಿಸುವ ಐಲೇಸಾಕ್ಕೆ ಧೀ ಶಕ್ತಿಯಾಗುವುದು ಹೊಸತೇನಲ್ಲ!   ಆ ಹಾದಿಯಲ್ಲಿಯೂ  ಒಂದು ಹೊಸ ಹೆಜ್ಜೆ   ಇಡುವುದಕ್ಕೆ ಮಹೇಶ್ ಅವರ ಸಾಧನೆ  ನಮಗೆ ಪ್ರೇರಣೆಯಾಗಲಿ.  

ಶಾಂತಾರಾಮ್ ಶೆಟ್ಟಿ 

ಟೀಂ  ಐಲೇಸಾ 

( ಈ ಸವಿನೆನಪುಗಳನ್ನು ಅಕ್ಷರಕ್ಕಿಳಿಸಲು  ಸ್ಪೂರ್ತಿಯಾದ  ಡಾ . ಜಯಶ್ರೀ  ಅರವಿಂದ್ , ಚರಣ್ ದಾಸ್  ಮಲ್ಯ , ಪಾಣಿನಿ ದೇರಾಜೆ, ಮೂರ್ತಿ ದೇರಾಜೆ , ಪ್ರೊ  ಶಂಕರ್ ರವರಿಗೆ ವಂದನೆಗಳು ) 

 -------------------------------------------------------























ಅಲ್ಲಲ್ಲಿ  ಮೊದಲ ಮಳೆಗೇ  ಅಂಕುರಿಸುವ   ನಾಯಿ ಕೊಡೆಯಂತೆ ಸಂಸ್ಥೆಗಳು ಹುಟ್ಟಿಕೊಂಡು ಸಿಕ್ಕಾಪಟ್ಟೆ ಬೇಕಾಬಿಟ್ಟಿ ಪ್ರಶಸ್ತಿ ಕೊಡುವ  ಈ ದಿನಮಾನಗಳಲ್ಲಿ  ಸಾಧಕರನ್ನು ಮರೆತು  ಬಿಡುವ ''ಮಹಾ ಸಾಧನೆಗೆ'' ಏನಾದರೂ ಪ್ರಶಸ್ತಿ ಕೊಡುವುದಿದ್ದರೆ ಅದನ್ನು ನಮಗೆ ನಾವೇ ಕೊಟ್ಟು ಪುರಸ್ಕರಿಸಿಕೊಳ್ಳುವುದು  ಅತೀ ಸೂಕ್ತ!. 











https://kannada.asianetnews.com/sandalwood/sangeeta-cassette-company-founder-hm-mahesh-passed-away-at-the-age-of-72-grg-r892ey



https://youtu.be/-52D8I748AM?si=_G2ekyANJoYsdvGK


 rajkumara avra modal haadu sampattige sawaal  first released in Sangeetha.



Hm mahesh:  songs in sangeetha

https://youtu.be/0WN8KEhQRGQ?si=nRlW3vvWIb0V6Nuc



about HMM

moola hesaru; mahalinga

gurualu:kaiyyara kinjanna.

https://youtu.be/WLGpQXsDt5A?si=x1NpgLp5GqGzobCW

ಸಾಧಕ HM Mahesh great. ನಮ್ಮ ಬದಿಯಡ್ಕಕ್ಕೆ ಹೆಮ್ಮೆ( kana

tande: h m narayana bhat

taayi: venkateshvari.

education: kasargodu badiyadka navajeevana high school. gurugalu; kaiyararu



his voice matches with mukesh.

studies: st allosious.

ashok charan invited HM to his nites.

navabharatha dalli chitra vaartha varadigaararag nantara udayavaniyalloo kelasa maadiru.


HM Mahesh story.

https://kannada.mojo-360.com/remembering-sangeetha-casette-h-m-mahesh/


Darideeri denna: HMM/s janaki.

https://youtu.be/EjZg9q9QtIQ?si=qzn8f9n8hbRwk_Dy


janaki- appe manas bangara

https://www.youtube.com/watch?v=j1uwMs3I1fw


radio cylone:https://viramatime.blogspot.com/2016/03/60_4.html

Comments

Popular posts from this blog

ಬಲೀಂದ್ರ ಲೆಪ್ಪು

ದೈವದ ನುಡಿ

ಮದಪೆರಾವಂದಿ ತುಳು ಪದೊಕುಲು ....ಗೊಂಚಿಲ್!.