ತುಳು ಎಂಟನೇ ಪರಿಚ್ಛೇದ ಹೋರಾಟ ಸಮಿತಿ
                                   ಇಂದಿರಾನಗರ ಎರಡನೇ ಹಂತ  ಬೆಂಗಳೂರು  ೫೬೦೦೦೮




                                                              ಪತ್ರಿಕಾ ಗೋಷ್ಠಿಗೆ ಆಹ್ವಾನ


ಮಾನ್ಯರೇ
                  ತಾರೀಖು  ೨೨-೧೨-೨೦೧೮  ಮಧ್ಯಾಹ್ನ  ೧೨-೩೦ ಗಂಟೆಗೆ  ಬೆಂಗಳೂರಿನ  ಪ್ರೆಸ್ ಕ್ಲಬ್  ಆವರಣದಲ್ಲಿ    ಸಾಹಿತಿ ಡಾ. ಉದಯ ಧರ್ಮಸ್ಥಳ ,  ತುಳು ಸಾಹಿತ್ಯ ಅಕಾಡಮಿ ಸದಸ್ಯ  ಪುರುಷೋತ್ತಮ  ಚೆಂಡ್ಲಾ  ಮತ್ತು ಅಲೋಕ್ ರೈ .  ಮತ್ತಿತರ ಉಪಸ್ಥಿತಿಯಲ್ಲಿ   ತುಳು ಭಾಷೆ  ಎಂಟನೇ ಪರಿಚ್ಚೇದ    ಸೇರುವ ಹೋರಾಟದ ಬಗ್ಗೆ ರೂಪು ರೇಷೆಗಳ  ವಿಷಯವಾಗಿ ಪತ್ರಿಕಾ ಗೋಷ್ಠಿ ಕರೆದಿದ್ದು  ತಮ್ಮೆಲ್ಲರನ್ನು ಆದರಪೂರ್ವಕವಾಗಿ  ಈ ಮೂಲಕ ಆಮಂತ್ರಿಸುತ್ತೇವೆ

ದಯವಿಟ್ಟು  ಎಲ್ಲಾ  ದೃಶ್ಯ ಮತ್ತು ಪತ್ರಿಕಾ  ಮಾಧ್ಯಮ ಬಂಧುಗಳು ಈ ಸಮಯದಲ್ಲಿ  ಹಾಜರಿದ್ದು ನಮ್ಮ  ಹೋರಾಟಕ್ಕೆ ವ್ಯಾಪಕ ಪ್ರಚಾರ ಕೊಡಬೇಕಾಗಿ ತಮ್ಮಲ್ಲಿ ಪ್ರಾರ್ಥನೆ.
 ಈ ಹಿಂದೆ  ತುಳು ಭಾಷೆಯ  ಬಗ್ಗೆ  ತಮ್ಮೆಲ್ಲರ ಕಳಕಳಿಯ  ಪ್ರೋತ್ಸಾಹವನ್ನು  ನಾವು ಈ  ಸಂಧರ್ಭದಲ್ಲಿ ನೆನೆಪಿಸಿಕೊಂಡು ಅದಕ್ಕಾಗಿ ತಮ್ಮನ್ನು ಅಭಿನಂದಿಸಿ ಈ ಬಾರಿಯೂ  ಅದೇ ರೀತಿಯ ಸಹಕಾರಕ್ಕೆ  ಪ್ರಾರ್ಥಿಸುತ್ತೇವೆ   . 



ಹೋರಾಟ ಸಮಿತಿ ಸಂಚಾಲಕರು
 ಪಳ್ಳಿ ವಿಶ್ವನಾಥ್ ಶೆಟ್ಟಿ
 ಸತೀಶ್ ಅಗ್ಪಾಲ
 ಶಾಂತಾರಾಮ್ ವಿ ಶೆಟ್ಟಿ 

Comments

Popular posts from this blog

ದೈವದ ನುಡಿ

ಬಲೀಂದ್ರ ಲೆಪ್ಪು

ಮದಪೆರಾವಂದಿ ತುಳು ಪದೊಕುಲು ....ಗೊಂಚಿಲ್!.