H M Mahesh
ಸಂಗೀತವನ್ನು ''ಸಂಗೀತಾ'' ದಿಂದ ಮನೆ ಮನ ಮುಟ್ಟಿಸಿದ ತುಳುನಾಡಿನ ಹೆಮ್ಮೆ H . M. ಮಹೇಶ್!. ------------------------------------ ಈ ಮಹಾನ್ ಮಹಾಲಿಂಗ ಹುಟ್ಟಿರದಿರುತ್ತಿದ್ದರೆ ನಾವೆಲ್ಲಾ ''ಗಜಮುಖನೆ ಗಣಪತಿಯೇ ನಿನಗೆ ವಂದನೆ'', ''ಶರಣು ಶರಣಯ್ಯ ಶರಣು ಬೆನಕ'' ದಂತಹ ಎಷ್ಟೋ ಹಳೆಯ ಸುಮಧುರ ಕನ್ನಡದ ಹಾಡುಗಳನ್ನು ಇವತ್ತಿಗೂ ಕೇಳಲಾಗದ ಶಾಶ್ವತ ಕಿವುಡರಾಗಿರಬೇಕಾಗಿತ್ತು!. ಅದರಲ್ಲೂ ತುಳು ಭಾಷಿಗರಂತೂ ಈ ಸಂಗೀತಾ ಮಹಾತ್ಮನನ್ನು ಮರೆಯಲೇ ಬಾರದಿತ್ತು!. ಆದರೂ ಮರೆತಿದ್ದೇವೆ ಅನ್ನುವುದು ಕೂಡಾ ಅರಗಿಸಲಾಗದ ಸತ್ಯ . ವೇದಿಕೆಗಳಲ್ಲಿ ಅಬ್ಬರಿಸಿ ಬೊಬ್ಬಿರಿಯುವ ನಿರೂಪಕರಾಗಲಿ , ಅವರಿಂದಲೇ ಬೆಳಗಿ ಬೆಳೆದ ಹಾಡುಗಾರರಾಗಲಿ ಯಾರೂ ಈ ಮಹಾಲಿಂಗನ ಹೆಸರನ್ನು ಕಾಟಚಾರಕ್ಕೂ ಎಲ್ಲೂ ನೆನೆಯದೆ ಪುನೀತರಾಗುವುದು ಈ ಪ್ರಕೃತಿಯ ಅಗಣಿತ ಅಚ್ಚರಿಗಳಲ್ಲಿ ಒಂದು. ''ಪಕ್ಕಿಲು ಮೂಜಿ ಒಂಜೇ ಗೂಡುಡು ಬದುಕೊಂದುಲ್ಲಗೆ '' ಇದು ನನ್ನ ಸಂಸಾರದ ಪ್ರೀತಿ ಗೀತೆ , ''ಕೆಮ್ಮಲೆತ ಬ್ರಹ್ಮ ನನ್ನ ಅಸ್ಮಿತೆ'' , ''ಡಿಂಗಿರಿ ಮಾಮ ಡಿಂಗಿರಿ ಮಾಮ'' ನಮ್ಮ ತುಳುನಾಡ ಉತ್ತರಕುಮಾರ ವೀರಗಾಥೆ, ''ಪೊನ್ನ ತೆಲಿಕೆಗ್ ಅರಲು ಮಲ್ಲಿಗೆ'',...